SSC Exam: ಯುಪಿಎಸ್‌ಸಿ ಅಷ್ಟೇ ಅಲ್ಲ, ಇನ್ಮುಂದೆ ಎಸ್ಎಸ್‌ಸಿ ಪರೀಕ್ಷೆ ಕಠಿಣ! ಅಭ್ಯರ್ಥಿಗಳು ಹೇಗೆಲ್ಲಾ ಪ್ರಿಪೇರ್ ಆಗ್ಬೇಕು ಗೊತ್ತಾ? / SSC Exams Getting Tougher Like UPSC! Are Aspirants Prepared for the Challenge?

[ad_1]

ಎಸ್​ಎಸ್​ಸಿ ಪರೀಕ್ಷೆಯಲ್ಲಿ ಇನ್ಮುಂದೆ ಮಹತ್ವದ ಬದಲಾವಣೆಗಳು ಇರಲಿವೆ. ಎಸ್​ಎಸ್​​ಸಿ ಪರೀಕ್ಷೆ ಪ್ರಾಧಿಕಾರಿ ಕೂಡ ಯುಪಿಎಸ್​​ಸಿ ಪರೀಕ್ಷೆ ನಿಯಾಮವಳಿಗಳನ್ನು ಪಾಲಿಸಿವೆ. ಇದು ಪರೀಕ್ಷೆಯಲ್ಲಿ ನಕಲು ತಡೆಯಲು ಸಾಹಯ ಮಾಡುತ್ತೆ ಎನ್ನಲಾಗಿದೆ.

ಪ್ರವೇಶ ಪ್ರಕ್ರಿಯೆಯಲ್ಲಿ ಸುಧಾರಣೆ

ಅಧಿಕೃತ ಸೂಚನೆಯ ಪ್ರಕಾರ, ಅಭ್ಯರ್ಥಿಗಳು ಆನ್‌ಲೈನ್ ನೋಂದಣಿ ಸಮಯದಲ್ಲಿ, ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಮತ್ತು ಪರೀಕ್ಷಾ ಕೇಂದ್ರದಲ್ಲಿ ಹಾಜರಾಗುವಾಗ ಆಧಾರ್ ದೃಢೀಕರಣವನ್ನು ಬಳಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಗುರುತನ್ನು ಸಾಬೀತುಪಡಿಸಲು ಆಯೋಗವು ಅದನ್ನು ಸ್ವಯಂಪ್ರೇರಿತವಾಗಿ ಇರಿಸಿದೆ.

ಆಧಾರ್ ಪಾತ್ರ ಎಂಥದ್ದು?

ಆಧಾರ್ ಎಂಬುದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿದ 12-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದ್ದು, ಇದು ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಮಾಹಿತಿಯನ್ನು ಆಧರಿಸಿದೆ. ಈ ಕ್ರಮವು ವಂಚನೆಯನ್ನು ತಡೆಯಲು ಮತ್ತು ಅಭ್ಯರ್ಥಿಗಳು ತಮ್ಮ ನಿಜವಾದ ಗುರುತನ್ನು ಸಾಬೀತುಪಡಿಸಲು ಸಹಾಯ ಮಾಡುತ್ತದೆ ಎಂದು SSC ಹೇಳುತ್ತದೆ.

ಅಭ್ಯರ್ಥಿಗಳ ಗುರುತಿನ ಪರಿಶೀಲನೆಯಲ್ಲಿ ಆಧಾರ್​​ ಸಹಾಯ

ನೇಮಕಾತಿ ಪ್ರಕ್ರಿಯೆಯಲ್ಲಿ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳ ಗುರುತನ್ನು ನಿಖರವಾಗಿ ದೃಢೀಕರಿಸುವುದು ಆಧಾರ್ ದೃಢೀಕರಣದ ಉದ್ದೇಶವಾಗಿದೆ. ಇದು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ.

ಎಸ್‌ಎಸ್‌ಸಿ ಕೂಡ ಯುಪಿಎಸ್‌ಸಿಯ ಮಾರ್ಗವನ್ನು ಅನುಸರಿಸಿತು!

ಕೇಂದ್ರ ಸಿಬ್ಬಂದಿ ಸಚಿವಾಲಯವು ಆಧಾರ್ ದೃಢೀಕರಣಕ್ಕೆ ಅನುಮೋದನೆ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೂ ಮೊದಲು, ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ತನ್ನ ಪರೀಕ್ಷೆಗಳಲ್ಲಿ ಆಧಾರ್ ದೃಢೀಕರಣವನ್ನು ಜಾರಿಗೆ ತರುವುದಾಗಿ ಘೋಷಿಸಿತ್ತು. ಇದರೊಂದಿಗೆ, ಮುಖ ಗುರುತಿಸುವಿಕೆ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಮೇಲ್ವಿಚಾರಣೆಯನ್ನು ಬಳಸಲು ಯುಪಿಎಸ್ಸಿ ನಿರ್ಧರಿಸಿತ್ತು. ಇದೀಗ ಎಸ್‌ಎಸ್‌ಸಿ ಕೂಡ ಯುಪಿಎಸ್‌ಸಿಯ ಮಾರ್ಗವನ್ನು ಅನುಸರಿಸಲು ಮುಂದಾಗಿದೆ.

ನೇಮಕಾತಿ ಪರೀಕ್ಷೆಗಳನ್ನು ಸುಧಾರಿಸುವತ್ತ ಕ್ರಮಗಳು

SSC ಮತ್ತು UPSC ಎರಡೂ ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತವೆ, ಇವುಗಳಿಗೆ ದೇಶಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗುತ್ತಾರೆ. ಕೇಂದ್ರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿನ ಗೆಜೆಟೆಡ್ ಅಲ್ಲದ ಹುದ್ದೆಗಳಿಗೆ ಅಂದರೆ ನಾನ್​ ಗೆಜೆಟೆಡ್​​ ಹುದ್ದೆಗಳಿಗೆ ಎಸ್‌ಎಸ್‌ಸಿ ಆಯ್ಕೆ ನಡೆಸುತ್ತದೆ. ಈಗ ಆಧಾರ್ ದೃಢೀಕರಣವು ಈ ಪರೀಕ್ಷೆಗಳ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣದ ಈ ಕ್ರಮವು ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ವಂಚನೆಯನ್ನು ಕಡಿಮೆ ಮಾಡುವ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ನಿಜವಾದ ಗುರುತನ್ನು ಸಾಬೀತುಪಡಿಸಬಹುದು ಮತ್ತು ಯಾರೂ ಸುಳ್ಳು ಗುರುತನ್ನು ಬಳಸುವಂತಿಲ್ಲ ಎಂದು ಖಚಿತಪಡಿಸುತ್ತದೆ.

ಕನ್ನಡ ಸುದ್ದಿ/ ನ್ಯೂಸ್/Jobs/

SSC Exam: ಯುಪಿಎಸ್‌ಸಿ ಅಷ್ಟೇ ಅಲ್ಲ, ಇನ್ಮುಂದೆ ಎಸ್ಎಸ್‌ಸಿ ಪರೀಕ್ಷೆ ಕಠಿಣ! ಅಭ್ಯರ್ಥಿಗಳು ಹೇಗೆಲ್ಲಾ ಪ್ರಿಪೇರ್ ಆಗ್ಬೇಕು ಗೊತ್ತಾ?

[ad_2]
Source link

Leave a Comment